Search...

ಪಿಇಎಸ್ ಕಾಲೇಜು ಮತ್ತು ಎನ್ ಸಿ ಸಿ 2 ಕರ್ನಾಟಕ ಬೆಟಾಲಿಯನ್ ವತಿಯಿಂದ ಆಯೋಜಿಸಿದ್ದ ಜನರಲ್ ಬಿಪಿನ್ ರಾವತ್ ಅವರಿಗೆ ಗೌರವ ನಮನ

ಪಿಇಎಸ್ ಕಾಲೇಜು ಮತ್ತು ಎನ್ ಸಿ ಸಿ 2 ಕರ್ನಾಟಕ ಬೆಟಾಲಿಯನ್ ವತಿಯಿಂದ ಆಯೋಜಿಸಿದ್ದ ಜನರಲ್ ಬಿಪಿನ್ ರಾವತ್ ಅವರಿಗೆ ಗೌರವ ನಮನ

ಬಿಪಿನ್ ರಾವತ್ ಅವರು ದೇಶ ಕಂಡ ಅದ್ವಿತೀಯ ಸೇನಾನಿ, ಭಾರತಾಂಬೆಯ ಮಡಿಲಲ್ಲಿ ಇಂತ‌ಹ ವೀರಯೋಧರು ಮತ್ತೊಮ್ಮೆ ಹುಟ್ಟಿಬರಲಿ ಎಂದು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಫೊ ಎಂ ಅರ್ ದೊರೆಸ್ವಾಮಿ ಹೇಳಿದರು. 

ಪಿಇಎಸ್ ಕಾಲೇಜು ಮತ್ತು ಎನ್ ಸಿ ಸಿ 2 ಕರ್ನಾಟಕ ಬೆಟಾಲಿಯನ್ ವತಿಯಿಂದ ಆಯೋಜಿಸಿದ್ದ ಜನರಲ್ ಬಿಪಿನ್ ರಾವತ್ ಅವರಿಗೆ ಗೌರವ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾವತ್ ಅವರು ದೇಶದ ಭದ್ರತೆ ಮತ್ತು ರಕ್ಷಣೆಗೆ ಮರೆಯಲಾಗದ ಸೇವೆ ಸಲ್ಲಿಸಿದ್ದಾರೆ. ಅವರ ದೇಶಪ್ರೇಮ ನಮಗೆಲ್ಲರಿಗೂ ಮಾದರಿ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಫೊ ಎಂ ಅರ್ ದೊರೆಸ್ವಾಮಿ, ಹನುಮಂತನಗರ ಪಿಇಎಸ್ ಕ್ಯಾಂಪಸ್ ನ ಶೈಕ್ಷಣಿಕ ನಿರ್ದೇಶಕರಾದ ಎಂ.ವಿ.ಸತ್ಯನಾರಾಯಣ, ಲೆಫ್ಟಿನೆಂಟ್ ಲೋಹಿತ್ ಹಾಗೂ ಎನ್ ಸಿ ಸಿ ಹಾಗೂ ಸಂಜೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

  • #Event
  • December 11, 2021
  • Viewed - 1685
  • Liked - 11